ಕನ್ನಡ

History of Bollollimaru Guthu

Bollollimaaruguthu, a well-known bunts family, which belongs to the Permude village and is said to be a very well reputed family which was getting respect even from neighbouring village Daiwa Gudi and temples. This family members belong to “Thaaliyanna” Bari and “Kavataaru temple ” is Adhi aalade for this family.

This family origins from Bajipe “Nellidadi Guthu” family. Bollollimaaruguthu family members still visits the base house to continue the relationship and tradition. This family had followed “Aliya Santhaana Kattu” which was introduced by Bhootala Pandya. This “Aliya Santhaana Kattu” quite in the land of TuluNadu. Even after the Indian government “Land Amendment Act – Bhu Sudarana Kanoonu(Law)” approximately 50 acres of land had been owned by this family. Some land was lost by the land maintenance law. This family lost control over their own commercial land at the 3 stages, over the years 1994, 2005 and 2009.

The house of this family had a main entrance towards east. After crossing the main entrance, going inside, on both the sides there found a fixed stone bench(jagali). Even after crossing that in the folk house of courtyard, there was Tulasi katte and yard surrounded by house all 4 sides. In the courtyard, facing east there was Jumaadi chavadi, where Jumadi Gunda had an entrance door facing north. Chavadi had 2 pillars, ceilings were covered in wood. In front of the main entrance there was open paddy fields. Side of which grown coconut, arecanut, banana plantation. Nearby was a small water stream flowing, to the left side of the house, there was a Bottu fields (kind of hill – less water area). Back of the house there was a small forest/hill station which was full of Jackfruit, mango, berries, hebbelasu(paje), gaali, goli varieties of plants and trees grown. To-gather it was an awesome village atmosphere in which the house was located and belonged to Bollollimaaruguthu family.

There existed a nagabana in the North-East( direction of the house, next to the flowing water stream. In the nagabana, there existed Naga & Raktheshwari.There existed a nagabana in the North-East (direction of the house, next to the flowing water stream. In the nagabana, there existed Naga & Raktheshwari.

In the Dharma Chavadi Jumaadi Banta and to the lower next Chavadi Ponnappe, in the North-West(vaayuvya) corner, at its peak point Ullaaya and Pilichandi Daiwas existed, field which was near to that Katalthaya Panjurli had its space. At the South-West (Nairuthya) direction in “Kumeru – a field” there was “Varthe panjurle” and Jagada Panjurli existed. In the North-West(vaayuvya) direction of the house, at a far off place, next to the field, there was a mango tree, down of which ”Raahu” was being believed. This family members had a custom of offering “Panavu” (mudipu) to the lord Thirupathi and Dharmasthala Manjunatha God during Diwali festival.

In this family, only head of the family known as “Mada” (Gadi pattinar) can perform for Rajan Daivas which is Jumaddi Banta, Ullaaya, Pilichandi and Kattalthaya Panjurli during Sankramana and various other Parvaa’s during festivals.

Relationship between Nellidadi Gutthu and Bollollimaru Guthu

Nellidhadi gutthu family belongs to Bajpe taluk, and it is said to be a very strong family. In this family Bajpe Grama Daiwa Jumaadi (Kantheri Jumaadi) existed. In this same Daiwa chavadi, Kantheri Jumaadi , Marle Jumaadi and Mahishanthaya exist. And also Posappe and Kallutti Panjurlidaiwa were included. Long back, Nellidadi gutthu and Bollollimaru guthu families were said to be born from the same mother. Eldest daughter was settled in Nellidhadi gutthu and a youngest daughter in Bollollimaru guthu. Till 1945, this family and Nellidhadi gutthu had a rule (Amekara), means, if any person from Nellidadi, is born or dead, Bollollimaru guthu family members were not supposed to go to temple and also not to work or engage in any of the auspicious functions.

Once, it so happened that, for some reason, one of the years for some reason, none of the Bollollimaru guthu members visit Nellidadi for Diwali. So, in Nellidadi “Gatti” did not boil even after a long time. By then, at that night, people came and took Bollollimaru guthu’s grandmother called “Chandu” with them. And when Chandu ajji went and touched the Gatti to check boiled or not, it boiled in some time. Previously, in our home Bollollimaru guthu, when there was no one (Gadipathinar) tolight the lamp to daiwa, Nellildadi Chautaru came to Bollollimaru guthu and lit a lamp and went. Upon that, the family members were supposed to go Nellidadi at least once in a year to drink thewater from the well. Once upon a time, in Nellidadi, a person called Soorinje Thyampu shettru, who was a black magician, was invited as guest to start basement construction of Chavadi(hall). He had 2 stones in his hand, which could absorb the poison. One stone he threw to the well in Thibar guthu and the other one to Nellidadi Gutthu’s well.

For that reason, whenever the people from Bajpe were bit from the snake, were cured and rescued by applying sandal paste that belonged to Nellidadi’s Jumaadi.In the year 2014, as we had kept Ashta Mangala Prashne inour home, it was found that our family should go and cometo Nellidadi as and then. So, our family members should continue this tradition in the future.

Nagabana History

In the land of tulunadu, worshipping snakes by the people is very much popular.Every family has a main origin of the nagabana. The family “Bollolli maru guthu” also has a nagbana. It exists in the very soil of this particular family. Till the year 2009, our family, Bollolli maru guthu, before owning all the property and house to O.N.G.C Company, our house resided in the eastern part, of the small part of flowing water, nearby existed a nagabana. In the year 1993, under the guidance of late Shantharama hedge, nagabana was renewed. Initially, in ournagabana, only naga existed. Later on, it was found to be known and believed that, there also existed Raktheshwari, by the person nagapaathri saamaga’s(Sagri Gopalakrishna saamaga)darshanam in 1993. During this time, the family of this lord snake had to worship and conduct Ashlesha Pooja every year. This Ashlesha Pooja is being followed and done till today every year.

These are the important keys to be understood regarding the god snake:

  1. Entry to the nagabana is permitted only after taking bath and wearing washed clothes.
  2. Strictly prohibited to dig the ground in the surroundings of nagabana, using any kind of weapons.
  3. Strictly prohibited to cut down the trees near nagabana.
  4. Offering milk from the cow of a dead calf to the snake god is not allowed.
  5. No usage of ashes and fertilizers near nangabana.
  6. Areca (pingara) flower, Kewda (kedage) flower and Champaca (sampige) are the favourite flowers of the snake lord.
  7. While offering milk, water on the snake idol, it has to fall on the ground in order to make the ground and the lord to remain cool and moist.

Until the year 2009, a priest (Annuraaya’s family) was performing puja in our nagabana. Later on, as he moved to the government land, to our new spot, our temple’s rules were to be followed by Radhakrishna thantri yedapadavu’s rules and performed pooja.

The Seva that are to be followed in nagabana:

  1. In the month of august, nagara panchami is celebrated.
  2. In the month of april, Ashlesha Pooja seva and kutumbikara thambila seva has to be done.

Things required to naga thambila:

  1. 1 kg belthige rice, 2 coconuts, 2 seeyala, beetle leaves(bachire) 1 arecanut, milk,50 gm arasina hudi, 100 ml honey, 50 gm sugar, 100 gm haralu (poddalu), 1⁄4 kg jaggery, camphor (karpura), batthi kattu, lamp oil, 7 bananas, agarbattis, banana leaves 5, coins.
English

ಬೊಳ್ಳೊಳ್ಳಿಮಾರುಗುತ್ತಿನ ಚರಿತ್ರೆ

ಬೊಳ್ಳೊಳ್ಳಿಮಾರುಗುತ್ತು ಪೆರ್ಮುದೆ ಊರಿನಲ್ಲಿ ಪ್ರತಿಷ್ಠಿತ ಬಂಟ ಮನೆತನವಾಗಿದ್ದು. ಊರು ಪರವೂರಿನ ದೇವಸ್ಥಾನ ದೈವಸ್ಥಾನಗಳಲ್ಲಿ ಮಾನ ಮರ್ಯಾದೆ ಪಡೆಯುತ್ತಿರುವ ಮನೆತನ ಈ ಮನೆಯ ಕುಟುಂಬಿಕರು ತಾಲಿಯನ್ನ ಬರಿಯವ ರಾಗಿದ್ದು ಇವರಿಗೆ ಕವತ್ತಾರು ಆದಿ ಅಲಡೆಯಾಗಿದೆ.

ಈ ಕುಟುಂಬಿಕರಿಗೆ ಬಜಪೆಯ ನೆಲ್ಲಿದಡಿ ಗುತ್ತು ಮೂಲದ ಮನೆಯಾಗಿದೆ.ಕುಟುಂಬಿಕರು ಆ ಮನೆಯೊಂದಿಗೆ ಸಂಪರ್ಕ ಇಟ್ಟುಕೊಂಡಿರಬೇಕು. ತುಳುನಾಡಿನ ಭೂತಾಳ ಪಾಂಡ್ಯನ ಕಟ್ಟಾದ ಅಳಿಯ ಸಂತಾನ ಕಟ್ಟು ಎನ್ನುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದ ಮನೆತನ ವಾಗಿದೆ. ಭಾರತ ಸರಕಾರ ಜಾರಿಗೆ ತಂದ ಭೂಸುಧಾರಣಾ ಕಾನೂನಿನ ನಂತರವೂ ಸುಮಾರು 50 ಎಕ್ರೆಯಷ್ಟು ಸ್ವಂತ ಭೂಮಿಯನ್ನು ಹೊಂದಿದ ಮನೆತನ ಕೆಲವು ಭೂಮಿ ಭೂಸುಧಾರಣಾ ಕಾನೂನಿಂದ ಕಳೆದುಕೊಂಡಿದ್ದೇವೆ. ಈ ಮನೆತನದ ಸರ್ವ ಜಮೀನು 1994,2005 ಹಾಗೂ 2009 ಹೀಗೆ 3 ಹಂತದಲ್ಲಿ ಕೈಗಾರಿಕೆಗೆ ನಮ್ಮ ಜಮೀನು ಸರ್ವಾದಿಗಳು ಸ್ವಾಧೀನ ಹೊಂದಿತ್ತು.

ಈ ಮನೆತನವು ಪೂರ್ವದಿಕ್ಕಿಗೆ ಮುಖಮಾಡಿರುವ ದೊಡ್ಡ ಹೆಬ್ಬಾಗಿಲನ್ನು ಹೊಂದಿತ್ತು. ಅದರಿಂದ ದಾಟಿ ಒಳಹೋದಾಗ ಎರಡು ಬದಿಯಲ್ಲೂ ಜಗಲಿ ಯಂತಿರುವ ಮೊಗಂಟಾವು ಇದ್ದು ಅದನ್ನು ದಾಟಿದಾಗ ನಡು ಅಂಗಲ 4 ಸುತ್ತಲೂ ಮನೆ ಇದ್ದು ನಡು ಅಂಗಳದಲ್ಲಿ ತುಳಸಿ ಕಟ್ಟೆ ನಡು ಅಂಗಳದಲ್ಲಿ ಪೂರ್ವಕ್ಕೆ ಮುಖ ಮಾಡಿ ಜಮಾದಿಯ ಚಾವಡಿ. ಈ ಚಾವಡಿಯಲ್ಲಿ ಉತ್ತರಕ್ಕೆ ಮುಖಮಾಡಿ ಜಮಾದಿಯ ಗುಂಡದ ಬಾಗಿಲು ಇತ್ತು. ಚಾವಡಿಯಲ್ಲಿ ಎರಡು ದೊಡ್ಡ ಭೋದಿಗೆ ಕಂಬಗಳಿದ್ದು ಮೇಲೆ ಮರದ ಮುಚ್ಚಿಗೆ ಇತ್ತು. ಮನೆಯ ಮೊಗಂಟೆಯ(ಹೆಬ್ಬಾಗಿಲು) ಎದುರು ದೊಡ್ಡ ಬಯಲು ಗದ್ದೆಗಳು, ಗದ್ದೆಯ ಕಟ್ಟ ಪುನಿಯಲ್ಲಿ ತೆಂಗು, ಕಂಗು ,ಬಾಳೆ ಗಿಡಗಳಿದ್ದು ಹತ್ತಿರವೇ ಹರಿಯುವ ನೀರಿನ ತೋಡು.ಎಡಭಾಗದಲ್ಲಿ ಬೆಟ್ಟು ಗದ್ದೆಗಳು ಹಿಂಭಾಗದಲ್ಲಿ ಹಲಸು ಮಾವು ಗೇರು ಹೆಬ್ಬಲಸು ಗಾಳಿ ಗೋಲಿ ಮೊದಲಾದ ವಿಧವಿಧದ ಗಿಡ ಮರಗಳಿಂದ ಕೂಡಿದ ಗುಡ್ಡ ಒಟ್ಟಿನಲ್ಲಿ ಉತ್ತಮ ಹಳ್ಳಿಯ ವಾತಾವರಣ ಹೊಂದಿದ ಮನೆ ಬೊಳ್ಳೊಳ್ಳಿಮಾರು ಗುತ್ತು.

ಈ ಮನೆಯ ಈಶಾನ್ಯ ಭಾಗದಲ್ಲಿ ಹರಿಯುವ ಸಣ್ಣ ತೋಡಿನ ಹತ್ತಿರ ನಾಗಬನ ವಿದೆ. ನಾಗಬನದಲ್ಲಿ ನಾಗ ಮತ್ತು ರಕ್ತೇಶ್ವರಿ ಸಾನಿಧ್ಯವಿದೆ.

ಧರ್ಮ ಚಾವಡಿಯಲ್ಲಿ ಜುಮಾದಿ ಬಂಟ. ಚಾವಡಿಯ ಕೆಳಗಿನ ಅಂತರದಲ್ಲಿ ಪೊಸಪ್ಪೆ , ವಾಯುವ್ಯ ಮೂಲೆಯ ಎತ್ತರದ ಜಾಗದಲ್ಲಿ ಉಲ್ಲಾಯ ಮತ್ತು ಪಿಲಿಚಂಡಿ ಸಾನಿಧ್ಯ ಅದರ ಹತ್ತಿರದ ಗದ್ದೆಯಲ್ಲಿ ಕಟ್ಟಲ್ತಾಯ ಪಂಜುರ್ಲಿ ನೈಋತ್ಯ ಭಾಗದ " ಕುಮೇರು" ಎನ್ನುವ ಜಾಗದಲ್ಲಿ ವರ್ತೆ ಪಂಜೂರ್ಲಿ ಮತ್ತು ಜಾಗದ ಪಂಜುರ್ಲಿ ಸಾನಿಧ್ಯ. ಮನೆಯ ವಾಯುವ್ಯ ಮೂಲೆಯಲ್ಲಿರುವ ದೂರದ ಗದ್ದೆಯ ಬದಿಯ ಮಾವಿನ ಮರದ ಬುಡದಲ್ಲಿ ರಾಹುವನ್ನು ನಂಬಿದ್ದರು .ಈ ಮನೆತನದ ಕುಟುಂಬಿಕರಿಗೆ ತಿರುಪತಿ ಮತ್ತು ಧರ್ಮಸ್ಥಳ ಮಂಜುನಾಥ ದೇವರಿಗೆ ದೀಪಾವಳಿ ಸಮಯದಲ್ಲಿ ಪನವು( ಮುಡಿಪು) ಕಟ್ಟುವ ಸಂಪ್ರದಾಯವಿದೆ.

ಈ ಮನೆತನದ ರಾಜನ್ ದೈವಗಳಾದ ಜುಮಾದಿ ಬಂಟ ಉಲ್ಲಾಯ ಪಿಲಿಚಂಡಿ ಹಾಗೂ ಕಟ್ಟಲ್ತಾಯ ಪಂಜುರ್ಲಿ ದೈವಗಳ ಸಂಕ್ರಮಣ ಹಾಗೂ ಇತರ ಪರ್ವಾಧಿಗಳನ್ನು ಮಾಡಲು ಗಡಿ ಹಿಡಿಯಬೇಕು ಈ ಮನೆತನದ ಗಡಿ ಹಿಡಿದವರನ್ನು ಮಾಡ ಎಂದು ಕರೆಯುತ್ತಾರೆ.

ಈ ಗಡಿ ಹಿಡಿದ ವ್ಯಕ್ತಿ ವೃತ ನಿಯಮಗಳಿಂದ ದೈವದ ಸೇವೆ ಮಾಡಬೇಕು. ಈ ವ್ಯಕ್ತಿಗೆ ಕುಟುಂಬದಲ್ಲಿ ನಡೆಯುವ ಯಾವುದೇ ಶುಭ ಕಾರ್ಯಗಳಲ್ಲಿ ಪ್ರಥಮ ಮನ್ನಣೆ ಸಲ್ಲಬೇಕು. ಬೇಸಾಯ ಈ ಮನೆತನದ ಮುಖ್ಯ ಕಸುಬಾಗಿದ್ದು ಏನೇಲು, ಸುಗ್ಗಿ ಮತ್ತು ಕೊಳಕೆ ಎನ್ನುವ ಮೂರು ಬೆಳೆಗಳನ್ನು ಒಂದು ವರ್ಷದಲ್ಲಿ ಬೆಳೆಯುತ್ತಿದ್ದರು. ಮನೆಯ ಮುಂಭಾಗದಲ್ಲಿ ಹರಿಯುತ್ತಿದ್ದ ನೀರಿನ ತೊಡಿಗೆ ಮಣ್ಣಿನ ಅಣೆಕಟ್ಟು ಕಟ್ಟಿ ಅದರ ನೀರನ್ನು ಬೇಸಾಯಕ್ಕೆ ಉಪಯೋಗಿಸುತ್ತಿದ್ದರು. ಇದರ ಜೊತೆಗೆ ತೆಂಗು ಕಂಗು ಬಾಳೆ ತೋಟವನ್ನು ಹೊಂದಿದ್ದರು.ಗದ್ದೆಯಲ್ಲಿ ಬತ್ತದ ಜೊತೆಗೆ ಉದ್ದು ಹುರುಳಿ ಹೆಸರು ಗೆಣಸು ಸೌತೆ ಹಾಗೂ ಇನ್ನಿತರ ತರಕಾರಿಗಳನ್ನು ಬೆಳೆಸುತ್ತಿದ್ದರು.ಕೃಷಿಗೆ ಬೇಕಾದ ಗೊಬ್ಬರವನ್ನು ಕೋಣ ದನಕರುಗಳನ್ನು ಸಾಕಿ ತಯಾರಿಸುತ್ತಿದ್ದರು.ಮನೆಯ ಹಟ್ಟಿ ತುಂಬಾ ಕೋಣ ದನಕರುಗಳಿದ್ದವು .2000 ಇಸವಿವರೆಗೆ ಈ ಮನೆಯಲ್ಲಿ ಐದು ಜೊತೆ ಕೋಣಗಳಿದ್ದವು .ಭತ್ತದ ಪೈರು ರಾಶಿ ಮಾಡಲು ಭತ್ತ ಒಣಗಿಸಲು ಮನೆಯ ಅಂಗಳ ಅಲ್ಲದೆ ಬೇರೆಯೇ ಒಂದು ದೊಡ್ಡ ಜಾಗ ಇತ್ತು.ಇದನ್ನು " ಮಿತ್ತಜಾಲ್ "ಎಂದು ಕರೆಯುತ್ತಿದ್ದರು. ನಮ್ಮ ಮನೆಯ ಹತ್ತಿರ ನಮ್ಮ ಮನೆಯ ಕೆಲಸಕ್ಕೆ ಬರಲು ಕೆಲವು ಜನರಿಗೆ ನಮ್ಮ ಜಾಗದಲ್ಲಿ ಮನೆ ಕಟ್ಟಲು ವ್ಯವಸ್ಥೆ ಮಾಡಿದ್ದೆವು. ಇದನ್ನು "ಒಕ್ಕಲು" ಮನೆ ಎಂದು ಕರೆಯುತ್ತಿದ್ದರು.

ಕಿನ್ನಿಗುರಿ ಮತ್ತು ಬಾಬಗುರಿ ಎನ್ನುವ 2 ಮನೆಗಳು ಜೊತೆಗೆ ಚುಂಗುಲಂಡ ಎನ್ನುವ ಗದ್ದೆಯ ಹತ್ತಿರ ಹಲವಾರು ಮುಸ್ಲಿಂ ಮನೆಗಳು ಇದ್ದವು. ಇವರು ನಮ್ಮ ಮನೆಗೆ ಕರೆದಾಗ ಕೆಲಸಕ್ಕೆ ಬಂದು ಯಜಮಾನರ ಮನೆಗೆ ಗೌರವ ತೋರಿಸುತ್ತಿದ್ದರು. ಇಂತಹ ಒಕ್ಕಲಿನ ಮನೆಯಲ್ಲಿ ಮದುವೆ ಹಾಗೂ ಇನ್ನಿತರ ಶುಭ ಕಾರ್ಯಗಳಾದರೆ ನಮ್ಮ ದೈವಗಳಿಗೆ ಶುಭ ಕಾರ್ಯದ ಆಮಂತ್ರಣ ಪತ್ರಿಕೆಯನ್ನು ಹೂವಿನೊಂದಿಗೆ ಚಾವಡಿಗೆ ಮೊದಲು ಸಲ್ಲಿಸುತ್ತಿದ್ದರು. ಅವರ ಮನೆಯಲ್ಲಿ ಶುಭ ಕಾರ್ಯಗಳಾಗುದಾದರೆ ಯಜಮಾನರ ಮನೆಗೆ ಹೆಸರುಬೇಳೆ ಹಾಗೂ ಬೆಲ್ಲ ನೀಡುತ್ತಿದ್ದರು. ಜೊತೆಗೆ ವೀಳ್ಯದೆಲೆ ಅಡಿಕೆ ನೀಡಿ ನಮ್ಮನ್ನು ಗೌರವಿಸುತ್ತಿದ್ದರು. ಈ ಮನೆತನದ ಹಿರಿಯರು ಹಿಂದೆ ಮದುವೆ ಸಂಬಂಧ ಬೆಳೆಸುವಾಗ ಗುತ್ತು ಬರ್ಕೆ ಭಾವ ಮತ್ತು ಪರಾಡಿ ಹೀಗೆ ಒಳ್ಳೆಯ ಮನೆತನದಿಂದ ಹೆಣ್ಣನ್ನು ತಂದು ಹಾಗೂ ಪ್ರತಿಷ್ಠಿತ ಮನೆಗಳಿಗೆ ಹೆಣ್ಣನ್ನು ಕೊಡುವ ಸಂಪ್ರದಾಯ ಮಾಡಿ ತನ್ನ ಮನೆತನದ ಘನತೆ ಗೌರವ ಹೆಬ್ಬಿಸುತ್ತಿದ್ದರು.

ಈ ಮನೆತನದ ಹಿರಿಯರ ಮಾಹಿತಿ ಸುಮಾರು 150 ವರ್ಷಗಳಷ್ಟು ಹಿಂದಿನದ್ದು ನಮಗೆ ತಿಳಿದಿದೆ. ಅದಕ್ಕಿಂತ ಹಿಂದಿನ ಮಾಹಿತಿ ನಮ್ಮಲ್ಲಿ ಲಭ್ಯವಿಲ್ಲ. ಉಮ್ಮಲು ಎನ್ನುವ ಏಳನೇ ತಲೆಮಾರಿನ ಹೆಂಗಸಿನಿಂದ ಈಗಿರುವ ನಮ್ಮ ವಂಶವೃಕ್ಷ ಬೆಳೆದಿದೆ. ಈ ಹೆಂಗಸನ್ನು ಕುತ್ತೆತ್ತೂರು ಕೊಡೆಪ ಬಾಳಿಕೆ ತಿಮ್ಮಣ್ಣ ಹೆಗ್ದೆ ಎಂಬವರಿಗೆ ಮದುವೆ ಮಾಡಿ ಕೊಟ್ಟರು.ಅವರಿಂದ ಹುಟ್ಟಿದ 4 ಹೆಣ್ಣು ಮಕ್ಕಳಿಂದ ಈಗಿರುವ 4 ಕವರು ಆರಂಭವಾಯಿತು.ಇದಲ್ಲದೆ ಹಿಂದೆ ಈ ಮನೆತನದಿಂದ ದೂರ ಉಳಿದ ನಂತರ ಜ್ಯೋತಿಷ್ಯದಲ್ಲಿ ಕಂಡುಬಂದಂತೆ ಮತ್ತೆ ಈ ಕುಟುಂಬವನ್ನು ಸೇರಿದ ಮೀನಕ್ಕೆ ಎಂಬ ಹೆಂಗಸಿನ ಕವರು ಹಾಗೂ 2013 ರಲ್ಲಿ ಸೇರಿದ ಜೋಕಟ್ಟೆ ಇನ್ನೊಂದು ಕವರು ಈ ಮನೆತನಕ್ಕೆ ಸೇರಿಕೊಂಡಿದ್ದಾರೆ.ಹಿಂದೆ ಕೂಡ ಕುಟುಂಬ ಇದ್ದ ಕಾರಣದಲ್ಲಿ ಒಂದು ಹೊತ್ತಿಗೆ 20 ಸೇರು ಅಕ್ಕಿ ಬೇಯಿಸಿದರೆ ಸಾಕಾಗದಷ್ಟು ಜನರು ಇಲ್ಲಿದ್ದರಂತೆ.

ಈ ಮನೆತನದ ಹಿರಿಯರು ದಾನ ಧರ್ಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಊರಿನಲ್ಲಿ ಹಾಗೂ ಪರವೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಬ್ರಹ್ಮಕಲಶ ಹಾಗೂ ಧರ್ಮನೇಮ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಹೊರೆ ಕಾಣಿಕೆ ಸಲ್ಲಿಸಿ ಮನೆತನದ ಗೌರವ ಕಾಪಾಡುತ್ತಿದ್ದರು. ಊರಿನ ದೇವಸ್ಥಾನ ದೈವಸ್ಥಾನ ಸಂಘ-ಸಂಸ್ಥೆಗಳಿಗೆ ತಮ್ಮ ಕೈಲಾದ ಧನಸಹಾಯ ನೀಡುತ್ತಿದ್ದರು. ಹೆಣ್ಣು ಮಕ್ಕಳಿಗೆ ಮದುವೆ ಆಗುವ ಸಂದರ್ಭ ಕಷ್ಟದಲ್ಲಿರುವವರು ಮನೆಕಟ್ಟುವಾಗ ಬೇರೆ ಬೇರೆ ರೂಪದಲ್ಲಿ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ.ಹಿರಿಯರು ಮಾಡುತ್ತಿದ್ದ ಈ ಸತ್ಕರ್ಮಗಳನ್ನು ಈಗಿನ ತಲೆಮಾರಿನವರು ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.ಅಷ್ಟಮಿ ದೀಪಾವಳಿ ಸಮಯದಲ್ಲಿ ಒಕ್ಕಲಿನವರು ಹಾಗೂ ಗದ್ದೆಯ ಕೆಲಸಕ್ಕೆ ಬರುವ ಗಂಡಸರು ಹೆಂಗಸರು ಮನೆಗೆ ಬಂದಾಗ ಅವರಿಗೆ ಅಕ್ಕಿ ಮತ್ತು ತೆಂಗಿನಕಾಯಿ ನೀಡುವ ಕ್ರಮವಿತ್ತು.ಈ ಕುಟುಂಬಿ ಕರು ಮದುವೆ, ಮನೆ ಒಕ್ಕಲು ಮೊದಲಾದ ಶುಭ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಮೊದಲು ಈ ಚಾವಡಿಗೆ ತಂದು ಹೂವಿನೊಂದಿಗೆ ಕಾಗದ ದೈವಕ್ಕೆ ಇಡುವ ಸಂಪ್ರದಾಯವಿದೆ .ಈ ಮನೆಯ ಕುಟುಂಬಿಕರು ಮಂತ್ರವಾದಿಗಳ ತಾಯಿತ (ಉರ್ಕು)ಕಟ್ಟ ಬಾರದೆಂದು ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಕೋಟೆದ ಬಬ್ಬು ದೈವದ ಗಂಧ ಹಾಕಿಕೊಂಡು ಈ ಮನೆಗೆ ಬರಬಾರದು. ಮಾಡರೂ ಕೋಟೆದ ಬಬ್ಬು ದೈವದ ಕೊಳಕ್ಕೂ ಹೋಗಬಾರದು. ಜೊತೆಗೆ ಮಾರಣಕಟ್ಟೆ (ಅಮ್ನೂರು) ದೇವಿಯ ಪ್ರಸಾದ ತರಬಾರದು ಈ ಮನೆಯಲ್ಲಿ ಗಂಡು ಮಕ್ಕಳ ಹೆಂಡತಿಯರಿಗೆ ಬಯಕೆ( ಸೀಮಂತ)ಅಗುದಾದರೆ ಕೋಳಿ ಬಿಡುವ ಸಂಪ್ರದಾಯವಿಲ್ಲ. ಮನೆಯಲ್ಲಿ ಹಾಲು ಕೊಡುವ ದನವಿದ್ದರೆ ಹೆಂಗಸರು ಬೆಳಿಗ್ಗೆ ಹಾಲು ಕರೆದು ಜುಮಾದಿಯ ಹೊಸ್ತಿಲಲ್ಲಿ ಇಡುವ ಪದ್ಧತಿಯಿದೆ. ಕೋಳಿ-ಮೀನು ಹಾಗೂ ವಿಶೇಷ ತಿಂಡಿ-ತಿನಸು ಮಾಡಿದರೆ ಹಿರಿಯರಿಗೆ ತಡ್ದ್ಯದಲ್ಲಿ ಅಂದರೆ ಕೈಸಟಿಯಲ್ಲಿ ಇಡುವ ಪದ್ಧತಿ ಇದೆ. ಈ ಮನೆಯ ಕುಟುಂಬಿಕರು ಪರವೂರಿನಲ್ಲಿ ಸತ್ತರೆ 16ನೇ ರಾತ್ರಿ ಅವರನ್ನು ಕುಟುಂಬದ ಹಿರಿಯರೊಂದಿಗೆ ಸೇರಿಸುವ ಕ್ರಮವಿದೆ. ಹೆತ್ತ ಮನೆಗೆ ಹಾಗೂ ಸತ್ತ ಮನೆಗೆ ಹೋದರೆ ನ್ನಾನ ಮಾಡದೆ ಚಾವಡಿಗೆ ಪ್ರವೇಶಿಸಬಾರದು. ಹಿಂದೆ ನಮ್ಮ ಜಾತಿಗಿಂತ ಕೀಳು ಜಾತಿಯವರು ಜುಮಾದಿ ಚಾವಡಿಗೆ ಪ್ರವೇಶಿಸಲು ಇರಲಿಲ್ಲ. ಆದರೆ ಕಾಲಕ್ರಮೇಣ ಸರಕಾರದ ಕಾನೂನು ಕಾಯಿದೆಯಿಂದ ಈ ಪದ್ಧತಿಯನ್ನು ನಾವು ಸಡಿಲಿಕೆ ಮಾಡಿದ್ದೇವೆ. ಈ ಮನೆಗೆ ಹಿರಿಯರಾದ ದಿ:ಶಾಂತರಾಮ ಹೆಗಡೆಯವರು 1988 ಇಸವಿಯಿಂದ ಕಟೀಲು ಮೇಳದ ಆಟವನ್ನು ಆರಂಭಿಸಿದರು. ಅದು ಇಂದಿನವರೆಗೂ ನಡೆಯುತ್ತಾ ಇದೆ.ಅವರು ತೀರಿಹೋದ ನಂತರ 2005 ಇಸವಿಯಿಂದ ಕುಟುಂಬದ ಪರವಾಗಿ ನಡೆಯುತ್ತಿದೆ. ನಮ್ಮ ಮನೆತನದ ಹಿರಿಯರು ಯಕ್ಷಗಾನ ಕಂಬಲ ಕೋಳಿಅಂಕ ಮೊದಲಾದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ ಅದರಲ್ಲಿ ಭಾಗವಹಿಸಿ ಈ ಮನೆತನಕ್ಕೆ ಹೆಸರನ್ನು ತಂದಿದ್ದಾರೆ.

ಈ ಮನೆತನದಲ್ಲಿ 1977 ಇಸವಿಯಲ್ಲಿ ಮಂಜಪ್ಪ ಬಾಕ್ಯಾರ್ ಎನ್ನುವ ಗದ್ದೆಯಲ್ಲಿ ದೊಂಪದ ಬಲಿ (ನೇಮ) 2000 ಇಸವಿಯಲ್ಲಿ ಎರಡು ದಿನದ ಧರ್ಮನೇಮ 2005 ಇಸವಿಯಲ್ಲಿ ಜಾಂಬವತಿ ಶೆಟ್ಟಿಯವರ ಮಗ ಸತೀಶ್ ಶೆಟ್ಟಿ ಅವರ ಮೂರು ದಿನದ ಹರಕೆಯ ಧರ್ಮನೇಮ 2001 ನೇ ಇಸವಿಯಲ್ಲಿ ಕುಟುಂಬದ ಸತ್ಯದೇವತೆ ಪಂಜುರ್ಲಿ ಮೊದಲಾದ ದೈವಗಳಿಗೆ ಕೋಲವಾಗಿತ್ತು 2015 ರಲ್ಲಿ ಗುರುರಾಜ ಮಾಡರಿಗೆ ಗಡಿಯಾಗುವ ಸಮಯದಲ್ಲಿ ನಾಲ್ಕು ದಿನದ ಧರ್ಮನೇಮ ವಾಗಿತ್ತು. ಈ ಮನೆಯ ಎದುರಿನ ಮುಡಾಯಿ ಎನ್ನುವ ದೊಡ್ಡ ಗದ್ದೆಯ ಎನೇಲು ಬೇಸಾಯದ ಸಮಯದಲ್ಲಿ ಮನೆ ಯಜಮಾನ ಉಪವಾಸವಿದ್ದು, ಈ ಗದ್ದೆಯ ಭತ್ತದ ನಾಟಿ ಆದಮೇಲೆ ಗದ್ದೆಯ ಮಧ್ಯದಲ್ಲಿ ಒಂದು ಹುಲಿಯ ರೂಪವನ್ನು (ಕಾಪು) ಮಾಡಿಟ್ಟು, ಎಲ್ಲ ಹೆಂಗಸರು ಗದ್ದೆಯ ಬದಿಯಲ್ಲಿ ನಿಂತು "ಉದೋ ಉದೋ" ಎಂದು ಹೇಳುವ ಕ್ರಮವಿತ್ತು. ಈ ಮನೆತನಕ್ಕೆ ಊರಿನ ಜಾತ್ರೆ ಮತ್ತು ನೇಮದ ದಿನ ಪ್ರಸಾದ ಹಾಗೂ ಮರಿಯಾದೆ ಸಲ್ಲುತ್ತದೆ ನಮ್ಮ ಊರಿನಲ್ಲಿ ಯಾವ ಮನೆಯಲ್ಲೂ ಸರಳ ಜುಮಾದಿ ನೇಮವಾದರೆ ಅದರ ಬದಿಕರ ತಾರಯಿ (ತೆಂಗಿನಕಾಯಿ)ನಮ್ಮ ಮನೆಗೆ ಸಲ್ಲುತ್ತದೆ.ನಮ್ಮ ಹಿರಿಯರಾದ ದಿ:ಶಾಂತರಾಮ ಹೆಗ್ಡೆಯವರು. ಪಾರಾಳೆ ಗುತ್ತು ಮನೆಯ ಹತ್ತಿರ ಇರುವ ಊರಿನ ಪಾಲ್ದಟ್ಟೆ ಸ್ನಾನಕ್ಕೆ ಧ್ವಜಾರೋಹಣದ ಗರುಡ (ಬೆಳ್ಳಿಯ ಗರಡೆ) ನೀಡಿದ್ದರು. ಇದರ ನೆನಪಿಗಾಗ ಪಾಲ್ದಟ್ಟೆ ಸಾನದಲ್ಲಿ ನಡೆಯುವ 5 ದಿನದ ನೇಮಗಳಲ್ಲೂ ನಮ್ಮ ಮನೆಗೆ ಗಂಧಪ್ರಸಾದ ಸಲ್ಲುತ್ತದೆ. ಸೋಮನಾಥ ದೇವಸ್ಥಾನಕ್ಕೆ ನಮ್ಮ ಕುಟುಂಬದ ಗೋಪಾಲಶೆಟ್ಟಿ ಮತ್ತು ದಯಾನಂದ ಶೆಟ್ಟಿ ಇವರ ಸೇವಾ ರೂಪವಾಗಿ ದೇವರಿಗೆ ಸುಮಾರು 20 ಲಕ್ಷ ಮೌಲ್ಯದ ಚಿನ್ನದ ಬಲಿಮೂರ್ತಿ ಹಾಗೂ ಚಿನ್ನದ ಸತ್ತಿಗೆಯನ್ನು 2019 ನೇ ಇಸವಿಯಲ್ಲಿ ಸಮರ್ಪಿಸಲಾಯಿತು. ಇದರ ನೆನಪಿಗಾಗಿ ದೇವರ ಜಾತ್ರೆಯ ಸಮಯದಲ್ಲಿ ಪ್ರಸಾದ ಸಲ್ಲುತ್ತದೆ.

ಪೆರ್ಮುದೆ ಊರಿನ ದೈವಗಳ ಆಭರಣ(ಪದ್ದೆಯಿ) ನಮ್ಮ ಮನೆಯಲ್ಲಿದೆ. ಸುಮಾರು ನೂರು ವರ್ಷಗಳಿಂದ ಈ ದೈವಗಳ ಆಭರಣವನ್ನು ನೀಡುವ ಅಧಿಕಾರ ನಮ್ಮ ಮನೆಗೆ ಇದೆ. ನೇಮದ ದಿನ ಈ ಬಂಗಾರವನ್ನು ನೇಮ ಅಗುವಲ್ಲಿಗೆ ಕೊಂಡೊಗಿ ನಂತರ ಅದನ್ನು ವಾಪಸ್ ತರುವ ಜವಾಬ್ದಾರಿ ನಮ್ಮ ಮನೆಗಿದೆ.

ಮಾಡ (ಕುಟುಂಬದ ಮುಖ್ಯಸ್ಥ)

ಗುರುರಾಜ್ ಶೆಟ್ಟಿ
ಪೆರ್ಮುದೆ ಪೋಸ್ಟ್ ಮತ್ತು ಗ್ರಾಮ ಮಂಗಳೂರು.

ಹುಟ್ಟು: 13 ಏಪ್ರಿಲ್ 1972

ಸಂಗಾತಿ: ಉಷಾ ಶೆಟ್ಟಿ (ಇರಾ ಪಾತ್ರಾಡಿ ಗುತ್ತು)

ಸಂಪರ್ಕಿಸಿ: 97405 53749

ಶಿಕ್ಷಣ: ಕಟೀಲ್ ಶ್ರೀ ದುರ್ಗಾಪರಮೇಶ್ವರಿ ಕಾಲೇಜು, ಕಟೀಲ್

ಪೋಷಕರು: ಪುಷ್ಪ ಶೆಟ್ಟಿ, ಶಂಕರ ಶೆಟ್ಟಿ (ಮುಂಕುರು ಸಂತ್ರಲಾಗುತ್ತು)

ಮಾಡ

ಗುರುರಾಜ್ ಗುರುವಾರ ಜನಿಸಿದಂತೆ, ಆ ಕಾರಣಕ್ಕಾಗಿ, ಒಬ್ಬ ಸನ್ಯಾಸಿ ಅವರನ್ನು ಗುರುರಾಜ್ ಎಂದು ಹೆಸರಿಸಲು ಹೇಳಿದರು. 20 ನೇ ವಯಸ್ಸಿನಲ್ಲಿ, ಅವರು ಪೆರ್ಮುಡೆ ಶರದಾ ಯಕ್ಷಗಾನ ಮಂಡಳಿಯಲ್ಲಿ ಕಂಡುಬಂದರು ಮತ್ತು ಅರ್ಥಧಾರಿ ಆಗಿ ಕಾಣಿಸಿಕೊಂಡರು...

30/04/2015 ರಂದು ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ನಡೆದ ಧರ್ಮನೇಮದಲ್ಲಿ ಊರ ಹಾಗೂ ಪರವೂರ ಗಡಿ ಪ್ರಧಾನರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಗುರುರಾಜ ಶೆಟ್ಟಿ ಇವರಿಗೆ "ಮಾಡ"ಎನ್ನುವ ಪಟ್ಟದ ಹೆಸರನ್ನು ನೀಡಿ ಗಡಿ ಪ್ರಧಾನವಾಯ್ತು.ಈ ಮನೆತನದಲ್ಲಿ ಗಡಿ ಹಿಡಿಯುವ ಸಂಪ್ರದಾಯ ಕಡ್ಡಾಯವಾಗಿ ಇರುವುದರಿಂದ ಹಿಂದಿನ ಗಡಿ ಹಿಡಿದವರ ವಿವರ ನಮ್ಮಲ್ಲಿಲ್ಲದಿದ್ದರೂ ಸುಮಾರು 1900 ಇಸವಿಯಿಂದ ಗಡಿ ಪ್ರಧಾನರಾದವರ ವಿವರ ನಮ್ಮಲ್ಲಿದೆ ಆ ಪ್ರಕಾರ:

  1. ಕಂಪು ಮಾಡ
  2. ರಾಮಣ್ಣ ಮಾಡ
  3. ಸಿದ್ದಣ್ಣ ಮಾಡ
  4. ಸಂಜೀವ ಮಾಡ
  5. ಗುರುರಾಜ ಮಾಡ
Load More

ಗಡಿ ಹಿಡಿಯುವುದು (ಗಡಿ ಪತ್ತುನು)

ಹಿಂದಿನ ಕಾಲದಿಂದಲೂ ತುಳುನಾಡಿನ ಗುತ್ತು ಬರ್ಕೆ ಭಾವ ಪರಾಡಿ ಮೊದಲಾದ ಮನೆತನಗಳಲ್ಲಿ ಕುಟುಂಬದ ರಾಜನ್ ದೈವಗಳ ಚಾವಡಿ ಅಥವಾ ಗುಂಡ ಪ್ರವೇಶಿಸಿ ದೈವಗಳಿಗೆ ನೀರು ಮತ್ತು ದೀಪ ಇಡಬೇಕಾದರೆ ಕುಟುಂಬದಲ್ಲಿ ದೈವಗಳ ಪಂಚಪರ್ವ ನಡೆಸಲು ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಲ್ಲಿ ಯಜಮಾನ ಸ್ಥಾನದಲ್ಲಿ ನಿಂತು ಮುಂದುವರೆಸಲು ಹಾಗೂ ಊರಿನ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಕುಟುಂಬಕ್ಕೆ ಸಿಗುವ ಮಾನ ಮರ್ಯಾದೆ ಸ್ವೀಕರಿಸಲು ಕುಟುಂಬವು ಹಿರಿಯ ಆರ್ಹವ್ಯಕ್ತಿಯನ್ನು ಗುರುತಿಸಿ ಆತನನ್ನು ದೈವಕ್ಕೆ ಒಪ್ಪಿಸುತ್ತಿದ್ದರು. ಇಂತಹ ವ್ಯಕ್ತಿಗೆ ಮದುವೆಯಾಗಿರಬೇಕು. ಹೆಂಡತಿ ಸತ್ತ ವ್ಯಕ್ತಿಗೆ ಗಡಿ ಹಿಡಿಯಲಾಗುವುದಿಲ್ಲ. ಶರೀರದಲ್ಲಿ ಅಪರೇಷನ್ ಮೊದಲಾದ ಗಾಯಗಳಾದ ವ್ಯಕ್ತಿಗೆ, ಶರೀರದಲ್ಲಿ ಅಂಗವಿಕಲತೆ ಇರುವವರಿಗೆ, ನಾಯಿ ಕಚ್ಚಿದ ವ್ಯಕ್ತಿಗೆ,ಜೈಲು ಸೇರಿದ ವ್ಯಕ್ತಿಗೆ ನೀಡಲಾಗುವುದಿಲ್ಲ.ಮದುವೆಯಾಗದ ವ್ಯಕ್ತಿಗೆ ಗಡಿ ಆಗುವುದಾದರೆ ಆ ವ್ಯಕ್ತಿಗೆ ಬಾಳೆಗಿಡ ದೊಂದಿಗೆ ಮದುವೆ ಮಾಡಿ ಗಡಿ ಕೊಡುತಿದ್ದರು .ಈ ವ್ಯಕ್ತಿ ಕುಟುಂಬದ ಸಂಪರ್ಕ ಕಳೆದು ದೈವದ ಸಂಪರ್ಕ ಹೊಂದುತ್ತಾನೆ. ಈ ವ್ಯಕ್ತಿಯ "ಪುಟ್ಟ ಪುದರ್ ದೆತ್ತ್ ದ್ ಪಟ್ಟದ ಪುದರ್"ಇಡುತ್ತಾರೆ. ಉದಾ: ಮಾಡ ಚೌಟ,ಶೆಟ್ಟಿವಾಲ್, ಕಾವ,ಅರಸ ಇತ್ಯಾದಿ. ಗಡಿ ಹಿಡಿದ ಯಜಮಾನರ ಹೆಸರಿನಿಂದ ಕರೆಯುತ್ತಾರೆ.ಗಡಿಯಾದ ವ್ಯಕ್ತಿಯನ್ನು ಪಟ್ಟದ ಹೆಸರಿನಿಂದಲೇ ಕರೆಯಬೇಕು.ಅವನ ಮೂಲ ಹೆಸರಿನಿಂದ ಯಾರಾದರೂ ಕರೆದರೆ ದೈವಗಳಿಗೆ ಅಂತವರು ತಪ್ಪುಕಾಣಿಕೆ ಹಾಕುವ ಸಂಪ್ರದಾಯ ಹಿಂದೆ ಇತ್ತೆಂದು ಹಿರಿಯರು ಹೇಳುತ್ತಾರೆ. ಇಂತಹ ವ್ಯಕ್ತಿ ತಾನು ಅಡುವ ನುಡಿ ನಡೆ,ವರ್ತನೆ,ಧರಿಸುವ ಉಡುಪು,ತಿನ್ನುವ ಆಹಾರ ಸಮಾಜದಲ್ಲಿ ಇರುವ ರೀತಿ-ನೀತಿಗಳ ಬಗ್ಗೆ ಕಟ್ಟುನಿಟ್ಟಾಗಿ ಚೌಕಟ್ಟಿನೊಳಗೆ ವ್ಯವಹರಿಸಬೇಕಾಗುತ್ತದೆ. ಈ ವ್ಯಕ್ತಿಯನ್ನು ಎಲ್ಲ ಹಿರಿಯರು ಗೌರವಪೂರ್ವಕವಾಗಿ ಬಹುವಚನ ದಿಂದಲೇ ಕರೆಯಬೇಕು. ಗಡಿ ಹಿಡಿದ ವ್ಯಕ್ತಿಯು ಸಹ ತಪ್ಪಿ ನಡೆದಲ್ಲಿ ದೈವದ ಕೋಪಕ್ಕೆ ಪಾತ್ರರಾಗುತ್ತಾರೆ. ತನ್ನ ಸ್ವಾರ್ಥವನ್ನು ಮರೆತು ಕುಟುಂಬದ ಏಳಿಗೆಗಾಗಿ ಶ್ರಮಿಸಬೇಕು. ಈ ವ್ಯಕ್ತಿಯ ಆಚಾರ-ವಿಚಾರ ಈ ಕೆಳಗಿನಂತಿದೆ:

  1. ಗಡಿಯಾದ ವ್ಯಕ್ತಿಯು ಪಟ್ಟದ ಗುರುತಿಗಾಗಿ ಬಂಗಾರದ ಬಳೆ ಸರಪಳಿ ಕೈಗೆ ಹಾಕಬೇಕು.
  2. ಬಿಳಿ ವಸ್ತ್ರಗಳನ್ನು ಉಡಬೇಕು.
  3. ಸತ್ತ ವ್ಯಕ್ತಿಯನ್ನು ಮುಟ್ಟಬಾರದು ಸೂತಕ ಇರುವ ಮನೆಯ ನೀರು ಆಹಾರವನ್ನು ಸ್ವೀಕರಿಸಬಾರದು ಸ್ಮಶಾನಕ್ಕೆ ಹೋಗಬಾರದು.
  4. ಉತ್ತರಕ್ರಿಯೆಯ ಊಟ ಮಾಡಬಾರದು. (ತಂದೆ-ತಾಯಿ ಹೊರತು ಪಡಿಸಿ).
  5. ಯಾವುದೇ ಕಾರ್ಯಕ್ರಮದಲ್ಲಿ ಊಟ ಮಾಡುವುದಾದರೆ ತುದಿ ಬಾಳೆ ಎಲೆಯಲ್ಲಿ ಊಟ ಮಾಡಬೇಕು.
  6. ಮುಟ್ಟಾದ ಹೆಂಗಸರಲ್ಲಿ ಮಾತನಾಡಬಾರದು.
  7. ಮುಟ್ಟಾದ ಹೆಂಗಸರು ಐದು ದಿನ ಕಳೆ ದಾದ ಮೇಲೆ ಮಾಡಿದ ಊಟ ಮಾಡಬಹುದು.
  8. ಮರಗಳನ್ನು ಏರಬಾರದು,ತಲೆಯಲ್ಲಿ ಭಾರವನ್ನು ಹೊರಬಾರದು.
  9. ಮುಂಚಿನ ದಿನದ ಆಹಾರ ಪದಾರ್ಥಗಳನ್ನು ತಿನ್ನಬಾರದು.
  10. ನಾಯಿ ಕಚ್ಚ ಬಾರದು,ಹಿಡಿಸೂಡಿ ಗಡಿ ಯಾದವರಿಗೆ ಸ್ಪರ್ಶಿಸಬಾರದು.
  11. ಬೂದಿ, ಗೊಬ್ಬರ ಎತ್ತಿಕೊಂಡು ಹೋಗಬಾರದು.
  12. ಬಾಯಿಯಲ್ಲಿ ಕೆಟ್ಟ ಮಾತುಗಳನ್ನಾಡಬಾರದು.
  13. ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು.
  14. ರಾಜನ್ ದೈವ ಹೊರತಾಗಿ ಬೇರೆ ದೈವಗಳಿಗೆ ಇಟ್ಟ ಸೀಯಾಳ ಕುಡಿಯಬಾರದು.
  15. ನೇಮೋತ್ಸವದ ದಿನ ಉಪವಾಸವಿರಬೇಕು.
  16. ಬೆಳಿಗ್ಗೆ ಬಾವಿಕಟ್ಟೆಯಲ್ಲಿ ಸ್ಥಾನ ಮಾಡಿ ತುಳಸಿಗೆ ನೀರೆರೆದು ದೈವಕ್ಕೆ ದೀಪವಿಟ್ಟು ಹಣೆಗೆ ಭಸ್ಮ ಧರಿಸಿ ಗಿಂಡೆಯಲ್ಲಿ ನೀರು ಇಟ್ಟು ಪ್ರಾರ್ಥಿಸಿ ಗಂಧ ಹಾಕಿ ನಂತರ ಆಹಾರ ಸ್ವೀಕರಿಸಬೇಕು.
  17. .ಕುಟುಂಬದ ಶುಭಕಾರ್ಯಗಳ ಪತ್ರಿಕೆಯಲ್ಲಿ ಮಾಡರ ಹೆಸರು ಹಾಕಬೇಕು. ಬೊಳ್ಳೊಳ್ಳಿಮಾರು ಗುತ್ತಿನ ಗಡಿ ಹಿಡಿಯುವ ಯಜಮಾನನನ್ನು ಮಾಡ ಎನ್ನುವ ಪಟ್ಟದ ಹೆಸರಿನಿಂದ ಕರೆಯುತ್ತಾರೆ. ಮಾಡರು ಬೆಳಿಗ್ಗೆ ಎದ್ದು ಸ್ನಾನ ಮಾಡಿ ತುಳಸಿಗೆ ನೀರೆರೆದು ಭಸ್ಮ ಧರಿಸಿ ಜುಮಾದಿಗೆ ದೀಪವಿಟ್ಟು ತಡ್ಯ (ಹೊಸ್ತಿಲು) ದಲ್ಲಿ ದೈವಕ್ಕೆ ನೀರು ಇಡಬೇಕು. ದೈವಕ್ಕೆ ಗಿಂಡೆಯ ನೀರು ಇಡಬೇಕು ಹಾಗೂ ರಾತ್ರಿ ಜುಮಾದಿಗೆ ದೀಪವಿಟ್ಟು ಚಾವಡಿಯ ತಂಬಡ ಮತ್ತು ಘಂಟೆಯನ್ನು ಬಡಿಯಬೇಕು. ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಜುಮಾದಿ,ಉಲ್ಲಾಯ ಮತ್ತು ಪಿಲಿಚಂಡಿ ಸಾನ ಪ್ರವೇಶಿಸಲು ಗಡಿ ಹಿಡಿಯಲೇ ಬೇಕು. 2014 ಇಸವಿಯಲ್ಲಿ ನಮ್ಮ ಮನೆಯಲ್ಲಿ ಇಟ್ಟ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕಟ್ಟಲ್ತಾ ಯ ಪಂಜುರ್ಲಿಗೂ ಮಾಡರೇ ಪರ್ವ ಸಂಕ್ರಾಂದಿ ಮಾಡಬೇಕೆಂದು ಕಂಡುಬಂತು. ಬೇರೆ ಎರಡು ಕಡೆ ಈ ಬಗ್ಗೆ ತಿಳಿದಾಗ ಅಲ್ಲೂ ಗಡಿ ಹಿಡಿದವರೇ ಮಾಡಬೇಕೆಂದು ಕಂಡುಬಂದ ಕಾರಣ ಈಗ ಈ ಕಟ್ಟಲ್ತಾಯ ಪಂಜೂರ್ಲಿಗೂ ಅವರೇ ಮಾಡುತ್ತಿದ್ದಾರೆ.

ಗಡಿ ಹಿಡಿದ ಮಾಡರಿಗೆ ಇರುವ ಕರ್ತವ್ಯಗಳು:

  1. ದಿನಾಲೂ ಬೆಳಿಗ್ಗೆ ಜುಮಾದಿಗೆ ಗಿಂಡೆಯ ನೀರಿಡಬೇಕು.ರಾತ್ರಿ ಗುಂಡದೊಳಗೆ ದೀಪ ಬಿಡಬೇಕು.
  2. ಅಷ್ಟಮಿ( ಕೃಷ್ಣಜನ್ಮಾಷ್ಟಮಿಯ) ದಿನ ಉಪವಾಸವಿದ್ದು ಮಧ್ಯರಾತ್ರಿ ಚಂದ್ರೋದಯದ ನಂತರ ತುಳಸಿಕಟ್ಟೆಯಲ್ಲಿ ಕೃಷ್ಣನಿಗೆ ಅಘ್ನ ಪ್ರದಾನ ಮಾಡಬೇಕು. ಮರುದಿನ ದ್ವಾದಶಿ ಊಟ ಮಾಡಬೇಕು.
  3. ವರ್ಷದ 12 ತಿಂಗಳು ಸಂಕ್ರಮಣದಂದು ಜುಮಾದಿ ಉಲ್ಲಾಯ ಪಿಲಿಚಂಡಿ ಮತ್ತು ಕಟ್ಟಲ್ತಾ ಯ ಪಂಜುರ್ಲಿಗೆ ಹೂವು ನೀರು ಇಟ್ಟು ಸಂಕ್ರಮಣ ಮಾಡಬೇಕು.ಹೋಮನ್ ಚಜ್ಯೆಯಿ ಹೋಮ ಇಡುವ ವರೆಗೆ ಅಕ್ಕಿಯ ಅಹಾರ ಸ್ವೀಕರಿಸದೆ ಶುದ್ಧವಾಗಿದ್ದು ಪರ್ವ ಮಾಡಬೇಕು.
  4. ಚೌತಿಯ ದಿನ ಉಪವಾಸವಿದ್ದು ದೇವರಿಗೆ (ಗಣಪತಿ ಇಟ್ಟು)ಪೂಜೆ ಮಾಡಿ ನಂತರ ಜುಮಾದಿಗೆ ಚೌತಿ ಮಾಡಬೇಕು.
  5. ದಸರಾದ ವಿಜಯದಶಮಿಯಂದು ಮನೆ ತುಂಬಿಸಬೇಕು. (ತೆನೆ ಹಾಕಬೇಕು)
  6. ದೀಪಾವಳಿಯ ಬಲಿಪಾಡ್ಯದಂದು ತಿರುಪತಿ ಮತ್ತು ಮಂಜುನಾಥ ದೇವರಿಗೆ ಮುಡಿಪು ಕಟ್ಟಿ ಜುಮಾದಿ,ಉಲ್ಲಾಯ,ಪಿಲಿಚಂಡಿ ಮತ್ತು ಕಟ್ಟಲ್ತಾಯ ಪಂಜುರ್ಲಿಗೆ ಪರ್ವ ಮಾಡಬೇಕು.
  7. ಪಾರಾಳೆ ಗುತ್ತಿನಲ್ಲಿ ನಡೆಯುವ ಕೋರಿ ಕಂಬುಲ ದಲ್ಲಿ ಭಾಗವಹಿಸಬೇಕು.
  8. ಗಡುಪಾಡಿ ನೇಮದ ದಿನ ನೇಮದ ಚಪ್ಪರ(ದೊಂಪ) ಹಾಕುವಲ್ಲಿಗೆ ಹೋಗಿ ಮರುದಿನ ಮುಕ್ಕೋಡಿಯಲ್ಲಿ ಪಿಲಿಚಂಡಿಯ ಭಂಡಾರ ಇಳಿಸಿ ಭಂಡಾರದೊಟ್ಟಿಗೆ ಹುಲಿಯ ಬಂಗಾರದ ಮೂರ್ತಿ ಹಿಡಿದುಕೊಂಡು ನೇಮ ಆಗುವಲ್ಲಿಗೆ ಹೋಗಬೇಕು.ನೇಮದಲ್ಲಿ ಭಾಗವಹಿಸಿ ನೇಮ ಮುಗಿದಾದ ಮೇಲೆ ಭಂಡಾರ ಮನೆಗೆ(ಮುಕ್ಕೋಡಿ) ಹುಲಿಯ ಮೂರ್ತಿಯನ್ನು ತಂದು ಮುಟ್ಟಿಸಬೇಕು.
  9. ಜನವರಿ ತಿಂಗಳಲ್ಲಿ ನಡೆಯುವ ಸೋಮನಾಥ ದೇವಸ್ಥಾನದ ಜಾತ್ರೆಯ ಸಮಯ ಧ್ವಜಾರೋಹಣ ದಿನ ಬಲಿ ಮುಗಿದ ಮೇಲೆ ದೇವರಿಂದ ಮಾಡರು (ದೇವರ ಬಲಿ ಮೂರ್ತಿ ಹೊತ್ತವರಿಂದ) ಪ್ರಸಾದ ಸ್ವೀಕರಿಸಬೇಕು.ಜಾತ್ರೆಯ ಮುಂಚಿನ ದಿನ ನೇಮಕ್ಕೆ ದೊಂಪ ಹಾಕುವಲ್ಲಿಗೆ ಹೋಗಬೇಕು. ಜಾತ್ರೆಯ ದಿನ ಬೆಳಿಗ್ಗೆ ಮುಕ್ಕೋಡಿ ಗೆ ಹೋಗಿ ಅಲ್ಲಿಂದ ಪಿಲಿಚಂಡಿಯ ಭಂಡಾರ ಇಳಿಸಿ ಹುಲಿಯ ಮೂರ್ತಿಯನ್ನು ದೇವಸ್ಥಾನಕ್ಕೆ ಕೊಂಡು ಹೋಗ ಬೇಕು. ರಾತ್ರಿ ನೇಮದಲ್ಲಿ ಭಾಗವಹಿಸಿ ದೇವರ ಜಳಕ ಮುಗಿದು ತೂಟೆಧಾರ ಆದ ಮೇಲೆ ದೈವ-ದೇವರ ಭೇಟಿ ಆದಮೇಲೆ ದೇವರ (ಬಲಿಮೂರ್ತಿ ಹೊತ್ತವರ) ಕೈಯಿಂದ ಪ್ರಸಾದ ಪಡೆದು ನಂತರ ನೇಮ ವಾದಮೇಲೆ ಭಂಡಾರವನ್ನು ಮುಕ್ಕೋಡಿ ಗೆ ಮುಟ್ಟಿಸಬೇಕು.
  10. ಫೆಬ್ರವರಿ ತಿಂಗಳಲ್ಲಿ ನಡೆಯುವ ಪಾಲ್ದಟ್ಟೆ(ಪಾಲೆದಡಿ ಸಾನ) ಸಾನದ 4 ದಿನ ನೇಮೋತ್ಸವಕ್ಕೆ ಒಂದು ವಾರ ಮುಂಚೆ ನಡೆಯುವ ಕೋರಿಗುಂಟ ದಲ್ಲಿ ಭಾಗವಹಿಸಿ ನೇಮೋತ್ಸವದ ಮುಂಚಿನ ದಿನ ದೊಂಪ ಹಾಕುವಲ್ಲಿಗೆ ಹೋಗಬೇಕು. ನೇಮದ ದಿನ ಬೆಳಿಗ್ಗೆ ಮುಕ್ಕೋಡಿ ಯಿಂದ ಪಿಲಿಚಂಡಿಯ ಭಂಡಾರ ಇಳಿಸಿ ಹುಲಿಯ ಮೂರ್ತಿಯನ್ನು ನೇಮ ಆಗುವಲ್ಲಿ ಗೆ ಕೊಂಡು ಹೋಗಬೇಕು. ನಾಲ್ಕು ದಿನದಲ್ಲಿ ನಡೆಯುವ 5 ನೇಮದಲ್ಲಿ ಭಾಗವಹಿಸಿ 5 ನೇಮದಲ್ಲೂ ನಮ್ಮ ಮನೆತನಕ್ಕೆ ಸಿಗಬೇಕಾದ ಗರುಡನ ಪ್ರಸಾದ ಸ್ವೀಕರಿಸಿ ಮೂರನೇ ದಿನದ ಸರಳ ಧೂಮಾವತಿ ಯ ನೇಮಕ್ಕೆ ನಮ್ಮ ಮನೆಯಿಂದ ನೇಮಕ್ಕೆ ಸಲ್ಲಿಸಬೇಕಾದ 25 ತೆಂಗಿನಕಾಯಿ 20 ಸೀಯಾಳ ತೆಂಗಿನಸಿರಿ ಹಿಂಗಾರದ ಹಾಳೆ ಬಾಳೆಎಲೆ ಮುಟ್ಟಿಸಬೇಕು. ಹಾಗೂ ಸರಳ ಜುಮಾದಿ ನೇಮದ ಬದಿಕರ ತಾರಾಯಿ ಪಡೆದು ಜೊತೆಗೆ ಪನಿಯಾರ ತೆಂಗಿನಕಾಯಿ ಪಡೆಯಬೇಕು. ತದನಂತರ ನಡೆಯುವ ನಮ್ಮ ಮನೆಯ ಉಳ್ಳಾಯ ದೈವದ ನೇಮದಲ್ಲಿ ಪನಿಯಾರ ತೆಂಗಿನಕಾಯಿ ಸ್ವೀಕರಿಸಬೇಕು .ನಾಲ್ಕನೇ ದಿನ ಪಿಲಿಚಂಡಿ ನೇಮ ಮುಗಿದ ಮೇಲೆ ಭಂಡಾರವನ್ನು ಮುಕ್ಕೋಡಿಗೆ ಮುಟ್ಟಿಸಬೇಕು.
  11. ಏಪ್ರಿಲ್ ತಿಂಗಳಲ್ಲಿ ನಡೆಯುವ ಮುಕ್ಕೋಡಿ ನೇಮದ ಮುಂಚಿನ ದಿನ ನೇಮಕ್ಕೆ ದೊಂಪ ಹಾಕುವಲ್ಲಿಗೆ ಹೋಗಬೇಕು. ಅದೇ ದಿನ ರಾತ್ರಿ ಭಂಡಾರ ಏರುವಲ್ಲಿಗೆ ಮುಕ್ಕೋಡಿ ಹೋಗಿ ಚಿನ್ನದ ಹುಲಿ ಹಿಡಿದು ನೇಮ ಆಗುವ ಸಾನದಲ್ಲಿದೆ ಹೋಗಬೇಕು. ಅಂದು ರಾತ್ರಿ ನಡೆಯುವ ತುಡಾರ ಬಲಿಯಲ್ಲಿ ಭಾಗವಹಿಸಿ ಮರುದಿನ ನೇಮ ಮುಗಿದು ಭಂಡಾರ ಮುಕ್ಕೋಡಿಗೆ ಮುಟ್ಟಿಸಬೇಕು.
  12. ಮೇಲೆ ಸೂಚಿಸಿದ ಎಲ್ಲಾ ನೇಮ ಆಗುವಲ್ಲಿಗೆ ನಮ್ಮ ಮನೆಯಲ್ಲಿರುವ ದೈವಗಳ ಬೆಳ್ಳಿ ಬಂಗಾರವನ್ನು ಕೊಂಡೋಗಿ ಮರಳಿ ಮನೆಗೆ ತರುವ ಜವಾಬ್ದಾರಿ ಮಾಡರದ್ದು.
  13. ಊರಲ್ಲಿ ಹಾಗೂ ಪರವೂರಿನಲ್ಲಿ ನಡೆಯುವ ನೇಮಗಳ ಆಹ್ವಾನ ಬಂದರೆ ಅಲ್ಲಿ ನೇಮಕ್ಕೆ ಹೋಗಬೇಕು.
  14. ಗ್ರಾಮದ ದೇವಸ್ಥಾನ ದೈವಸ್ಥಾನಗಳಿಗೆ ಸಂಬಂಧಪಟ್ಟ ಸಭೆಯಲ್ಲಿ ಭಾಗವಹಿಸಿ ತನ್ನ ಅಭಿಪ್ರಾಯ ತಿಳಿಸಬೇಕು.
  15. ಮಾಡರು ಊರಿನ ನೇಮಗಳಿಗೆ ಹಾಗೂ ಮನೆಯಲ್ಲಿ ದೈವಗಳಿಗೆ ನಡೆಯುವ ಪರ್ವ ಸಂಕ್ರಾಂದಿ ಮೊದಲಾದವುಗಳಿಗೆ ಕಚ್ಚೆ ಹಾಕಿ ಬಟ್ಟೆ ಹಾಕದೆ ತಲೆಗೆ ತರೆತ್ರ (ಮುಂಡಾಸು) ಹಾಕಿ ಶರೀರದ ಅಂಗಗಳಿಗೆ ಗಂಧ ಹಚ್ಚಿ ಮದುಮಗನ ಅಲಂಕಾರದಲ್ಲಿರಬೇಕು. ನಮ್ಮ ಮನೆಯಲ್ಲಿ ಗಡಿ ಹಿಡಿಯುವುದು ಕಡ್ಡಾಯವಾಗಿದೆ ಯಾಕೆಂದರೆ ದೈವಗಳಿಗೆ ಅವರ ಕುಟುಂಬದ ಆಯ್ದ ವ್ಯಕ್ತಿ ಸೇವೆ ಮಾಡಿದರೆ ತೃಪ್ತಿಯಾಗುತ್ತದೆ. ಬ್ರಾಹ್ಮಣರು ಅಥವಾ ಹೊರಗಿನ ಮುಕ್ಕಾಲ್ದಿ ಗಳನ್ನು ಭರಿಸಿದರೆ ಕುಟುಂಬದ ವ್ಯಕ್ತಿ ಮಾಡಿದಷ್ಟು ಭಕ್ತಿ ಶ್ರದ್ಧೆಯಿಂದ ಅವರು ಮಾಡುವುದಿಲ್ಲ. ಅಲ್ಲದೆ ನಮ್ಮ ಮನೆಯ ಮಾಡರಿಗೆ ಮುಕ್ಕೋಡಿಯ ಪಿಲಿಚಂಡಿಯ ಭಂಡಾರ ಇಳಿಸುವ ಅಧಿಕಾರ ಮತ್ತು ಹುಲಿಯ ಚಿನ್ನದ ಮೂರ್ತಿಯನ್ನು ಹಿಡಿಯಲು ಗಡಿ ಹಿಡಿಯಲೇ ಬೇಕಾಗುವುದರಿಂದ ನಮ್ಮ ಮನೆಯಲ್ಲಿ ಗಡಿ ಹಿಡಿಯುವುದು ಕಡ್ಡಾಯವಾಗಿದೆ. ನಮ್ಮ ಮೂಲದ ಬೊಳ್ಳೊಳ್ಳಿಮಾರು ಗುತ್ತು ಕಂಪನಿಗೆ ಸ್ವಾಧೀನ ಆಗುವವರೆಗೆ (2009 ಇಸವಿ) ಮಾಡರ ಮಾನ ಮರ್ಯಾದೆ ಯ ಖರ್ಚಿಗೆಂದು ಸ್ವಲ್ಪ ಗದ್ದೆ ಸಣ್ಣ ತೋಟ ಹಾಗೂ 4 ಪಾಲಿನಿಂದ ವರ್ಷಕ್ಕೆ 4 ಮುಡಿ ಅಕ್ಕಿ ಕೊಡಲಿಕ್ಕಿತ್ತು. ಮೂಲದ ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಮಾಡರು‌ ಸತ್ತರೆ ಅವರನ್ನು ಸುಡಲು "ತಿಮಲಾಕ್ಸಾರ್" ಎನ್ನುವ ಗದ್ದೆಯಲ್ಲಿ ಸುಡಬೇಕಾಗಿತ್ತು. ನಮಗೆ ತಿಳಿದ ಬೊಳ್ಳೊಳ್ಳಿಮಾರುಗುತ್ತಿನ ನೂರು ವರ್ಷಗಳ ಇತಿಹಾಸದಲ್ಲಿ
    1. 1. ಕಂಪು ಮಾಡ, 2.ರಾಮಣ್ಣ ಮಾಡ, 3. ಸಿದ್ದಣ್ಣ ಮಾಡ ಇವರಿಗೆ ಮುಕ್ಕೋಡಿ ಪಿಲಿಚಂಡಿ ನೇಮದಲ್ಲಿ, 4. ಸಂಜೀವ ಮಾಡರಿಗೆ ಪಾಲ್ದಟ್ಟೆ ಸಾನದಲ್ಲಿ, 5. ಗುರುರಾಜ ಮಾಡರಿಗೆ 30/4/2015 ರಂದು ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಧರ್ಮನೇಮ ಕೊಟ್ಟು ಗಡಿಯಾಗಿತ್ತು. ಮನೆತನದಲ್ಲಿ ಗಡಿ ಹಿಡಿದವರು ಇರುವುದು ಕುಟುಂಬಕ್ಕೆ ಹಾಗೂ ದೈವಗಳಿಗೆ ತಿಲಕ ವಿದ್ದಂತೆ ಆದ್ದರಿಂದ ಈ ಸಂಪ್ರದಾಯವನ್ನು ಎಂದಿಗೂ ಈ ಮನೆತನದಲ್ಲಿ ನಿಲ್ಲಿಸದೆ ಮುಂದುವರಿಸಿಕೊಂಡು ಹೋಗಬೇಕಾಗಿ ಕುಟುಂಬಿಕರೆಲ್ಲರಲ್ಲಿ ವಿನಂತಿ.

ನೆಲ್ಲಿದಡಿ ಗುತ್ತಿಗೂ ಬೊಳ್ಳೊಳ್ಳಿಮಾರು ಗುತ್ತಿಗೂ ಇರುವ ಸಂಬಂಧ

ನೆಲ್ಲಿದಡಿ ಗುತ್ತು ಬಜಪೆ ಗ್ರಾಮದಲ್ಲಿರುವ ಒಂದು ಪ್ರತಿಷ್ಠಿತ ಬಂಟ ಮನೆತನ. ಈ ಮನೆತನದಲ್ಲಿ ಬಜ್ಪೆ ಗ್ರಾಮದ ದೈವವಾದ ಜುಮಾದಿ (ಕಾಂತೇರಿ ಜುಮಾದಿ) ನೆಲೆಯಾಗಿದ್ದಾನೆ. ಈ ಚಾವಡಿಯಲ್ಲಿ ಕಾಂತೇರಿ ಜುಮಾದಿ ಮರ್ಲ್ ಜುಮಾದಿ ಮತ್ತು ಮಹಿಷಂತಾಯ ನೆಲೆಯಾಗಿದ್ದಾರೆ ಹಾಗೂ ಪೊಸಪ್ಪೆ ಮತ್ತು ಕಲ್ಲುಟ್ಟಿ ಪಂಜುರ್ಲಿ ದೈವಗಳಿವೆ. ಅನಾದಿಯಲ್ಲಿ ನೆಲ್ಲಿದಡಿ ಗುತ್ತು ಮತ್ತು ಬೊಳ್ಳೊಳ್ಳಿಮಾರು ಗುತ್ತು ಒಂದೇ ತಾಯಿಯ ಸಂತಾನವಾಗಿದ್ದರು.ಒಂದೇ ತಾಯಿಯ ದೊಡ್ಡ ಮಗಳು ನೆಲ್ಲಿದಡಿಯಲ್ಲೂ ಚಿಕ್ಕ ಮಗಳು ಬೊಳ್ಳೊಳ್ಳಿಮಾರು ಗುತ್ತಿನಲ್ಲೂ ವಾಸವಾದರು.1945 ಇಸವಿಯವರೆಗೆ ಈ ಮನೆಗೂ ನೆಲ್ಲಿದಡಿ ಗುತ್ತಿಗೂ ಅಮೆ ಕರ ಇತ್ತು. ಅಂದರೆ ನೆಲ್ಲಿದಡಿಯಲ್ಲಿ ಯಾರಾದರೂ ಹೆತ್ತರೆ ಅಥವಾ ಸತ್ತರೆ ಬೊಳ್ಳೊಳ್ಳಿಮಾರುಗುತ್ತಿನ ಅವರಿಗೆ ದೇವಸ್ಥಾನಕ್ಕೆ ಹೋಗಲು ಇರಲಿಲ್ಲ ಹಾಗೂ ಶುಭ ಕೆಲಸ ಮಾಡಲು ಇರಲಿಲ್ಲ.ಉದಾಹರಣೆಗೆ 1945 ಇಸವಿಯಲ್ಲಿ ಗುರುರಾಜ್ ಮಾಡರ ತಾಯಿ ಪುಷ್ಪ ಶೆಟ್ಟಿ ಅವರ ಮದುವೆ ದಿನ ನಿಗದಿಯಾಗಿತ್ತು. ಈ ಮಧ್ಯೆ ನೆಲ್ಲಿದಡಿಯಲ್ಲಿ "ಸುಬ್ಬಣ್ಣ" ಎನ್ನುವವರು ತೀರಿ ಹೋದ ಕಾರಣ ಮದುವೆಯನ್ನು ಮುಂದೂಡಲಾಗಿತ್ತು.ನೆಲ್ಲಿದಡಿಯಲ್ಲಿ ಪ್ರತಿವರ್ಷ ಆಗುವ ಆಟಿ ಅಮಾವಾಸ್ಯೆ ಹಾಗೂ ದೀಪಾವಳಿ ಪರ್ವಕ್ಕೆ ಬೊಳ್ಳೊಳ್ಳಿಮಾರುಗುತ್ತಿನವರು ಹೋಗಲೇಬೇಕು.ಇಲ್ಲದಿದ್ದರೆ ದೀಪಾವಳಿಯ "ಗಟ್ಟಿ" (ತಿನ್ನುವ ಅಡ್ಡೆ) ಬೇಯುತಿರಲಿಲ್ಲವಂತೆ.

ಒಂದು ಸಲ ದೀಪಾವಳಿಯ ದಿನ ಬೊಳ್ಳೊಳ್ಳಿಮಾರುಗುತ್ತಿನವರಿಗೆ ಯಾವುದೊ ಕಾರಣದಿಂದ ದೀಪಾವಳಿಯ ದಿನ ನೆಲ್ಲಿದಡಿಗೆ ಹೋಗಲಾಗಲಿಲ್ಲ.ನೆಲ್ಲಿದಡಿಯಲ್ಲಿ" ಗಟ್ಟಿ" ಎಷ್ಟು ಬೇಯಿಸಿದರು ಬೇಯಲಿಲ್ಲ. ಆಗ ರಾತ್ರಿ ನೆಲ್ಲಿದಡಿ ಯಿಂದ ಜನ ಬಂದು ನಮ್ಮ ಮನೆಯ ಅಜ್ಜಿ ಚಂದು ಅವರನ್ನು ರಾತ್ರಿಯೇ ಬಂದು ಕರೆದುಕೊಂಡು ಹೋದರಂತೆ. ಇವರು ಹೋಗಿ ಅಲ್ಲಿ ಗಟ್ಟಿಯನ್ನು ಮುಟ್ಟಿ ಅಡಿಮೇಲು ಮಾಡಿದಾಗ ಸ್ವಲ್ಪ ಹೊತ್ತಿನಲ್ಲಿ ಗಟ್ಟಿ ಬೇಯಿತಂತೆ. ಹಿಂದೆ ಒಂದು ಸಮಯದಲ್ಲಿ ನಮ್ಮ ಮನೆಯಲ್ಲಿ ಗಡಿ ಹಿಡಿದವರು ಇಲ್ಲದಿದ್ದಾಗ ನೆಲ್ಲಿದಡಿಯ ಚೌಟರು ಬೊಳ್ಳೊಳ್ಳಿಮಾರು ಗುತ್ತಿಗೆ ಬಂದು ದೀಪ ಇಟ್ಟು ಹೋಗುತಿದ್ದರಂತೆ. ಅಲ್ಲದೆ ನಮ್ಮ ಕುಟುಂಬಿಕರು ವರ್ಷಕ್ಕೆ ಒಮ್ಮೆಯಾದರೂ ನೆಲ್ಲಿದಡಿಗೆ ಹೋಗಿ ಅಲ್ಲಿಯ ಬಾವಿಯ ನೀರು ಕುಡಿಯಬೇಕಂತೆ.ಹಿಂದೆ ನೆಲ್ಲಿದಡಿ ಗುತ್ತಿನ ಚಾವಡಿಗೆ ಸೂರಿಂಜೆ "ತ್ಯಾಂಪು ಶೆಟ್ರು" ಎನ್ನುವ ಮಂತ್ರವಾದಿ ಬಂದು ಕೆಸರು ಕಲ್ಲು ಹಾಕಿದರು.ಅವರ ಕೈಯಲ್ಲಿ ಎರಡು ವಿಷ ಹೀರುವ ಕಲ್ಲುಗಳಿದ್ದವು.ಒಂದು ಕಲ್ಲನ್ನು ಶಿಬರೂರು ಗುತ್ತಿನ ಬಾವಿಗೂ ಇನ್ನೊಂದು ಕಲ್ಲನ್ನು ನೆಲ್ಲಿದಡಿ ಗುತ್ತಿನ ಬಾವಿಗೂ ಹಾಕಿದರು.

ಆದ್ದರಿಂದ ಬಜಪೆ ಗ್ರಾಮದ ಜನರಿಗೆ ಹಾವು ಕಚ್ಚಿದರೆ ನೆಲ್ಲಿದಡಿಯ ಜುಮಾದಿಯ ಗಂಧ ಹಾಕಿದರೆ ಪರಿಹಾರವಾಗುತ್ತಿತ್ತು.2014 ಇಸವಿಯಲ್ಲಿ ನಮ್ಮ ಮನೆಯಲ್ಲಿ ಇಟ್ಟ ಅಷ್ಟಮಂಗಲ ಪ್ರಶ್ನೆಯಲ್ಲಿ ನಮ್ಮ ಕುಟುಂಬಿಕರು ನೆಲ್ಲಿದಡಿಗೆ ಆಗಾಗ ಹೋಗುತಿರಬೇಕೆಂದು ಕಂಡುಬಂತು ಆದ್ದರಿಂದ ಕುಟುಂಬಿಕರು ಇದನ್ನು ಮುಂದುವರಿಸಿಕೊಂಡು ಹೋಗಬೇಕು.

ನಾಗ ಬನದ ಚರಿತ್ರೆ

ತುಳುನಾಡಿನಲ್ಲಿ ಹುಟ್ಟಿದ ಸರ್ವ ಹಿಂದುಗಳು ನಾಗದೇವರ ಆರಾಧಕರಾಗಿದ್ದಾರೆ. ಪ್ರತಿ ಕುಟುಂಬಕ್ಕೂ ಒಂದು ಮೂಲ ನಾಗಬನ ವಿರುತ್ತದೆ. ಬೊಳ್ಳೊಳ್ಳಿಮಾರು ಗುತ್ತು ಮನೆತನಕ್ಕೂ ನಾಗ ಬನವಿದೆ ಅದು ನಮ್ಮ ಮನೆತನದ ಮಣ್ಣಿನಲ್ಲಿಯೇ ಇದೆ. 2009 ಇಸವಿಯವರೆಗೆ ನಮ್ಮ ಬೊಳ್ಳೊಳ್ಳಿಮಾರು ಗುತ್ತು ಮನೆ ಸರ್ವ ಆಸ್ತಿಪಾಸ್ತಿ ಒ.ಎನ್ .ಜಿ.ಸಿ.ಕಂಪನಿಗೆ ಸ್ವಾಧೀನ ಆಗುವ ಮೊದಲು, ನಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಹರಿಯುವ ಸಣ್ಣ ನೀರಿನ ತೋಡಿನ ಹತ್ತಿರ ನಾಗಬನವಿತ್ತು. 1993 ಇಸವಿಯಲ್ಲಿ ದಿವಂಗತ ಶಾಂತರಾಮ್ ಹೆಗ್ಡೆ ಅವರ ಮುಂದಾಳುತನದಲ್ಲಿ ನಾಗಬನ ನವೀಕರಣಗೊಂಡಿತ್ತು.ಮೊದಲು ನಮ್ಮ ನಾಗಬನದಲ್ಲಿ ಕೇವಲ ನಾಗ ಮಾತ್ರ ಇತ್ತು .1993 ರಲ್ಲಿ ನಾಗಪಾತ್ರಿ ಸಾಮಗ (ಸದ್ರಿ ಗೋಪಾಲಕೃಷ್ಣ ಸಾಮಗ) ದರ್ಶನದಲ್ಲಿ ನಿಮ್ಮ ಬನದಲ್ಲಿ ರಕ್ತೇಶ್ವರಿ ಯನ್ನು ನಂಬಬೇಕೆಂದು ಹೇಳಿದ ಕಾರಣ ರಕ್ತೇಶ್ವರಿ ಯನ್ನು ನಂಬಲಾಯಿತು. ಈ ಸಮಯದಲ್ಲಿ ನಾಗದೇವರು ಈ ಮನೆತನ ಪ್ರತಿವರ್ಷವೂ ವಟು ಆರಾಧನೆ ಮತ್ತು ಆಶ್ಲೇಷ ಪೂಜೆ ಮಾಡಬೇಕು ಎಂದು ಹೇಳಿದ ಕಾರಣ ಈವರೆಗೂ ನಮ್ಮ ನಾಗಬನದಲ್ಲಿ ವರ್ಷಕೊಮ್ಮೆ ಆಶ್ಲೇಷ ಪೂಜೆ ನಡೆಯುತ್ತದೆ.

ನಾಗದೇವರಿಗೆ ಸಂಬಂಧಪಟ್ಟು ತಿಳಿಯಬೇಕಾದ ಮುಖ್ಯ ವಿಷಯಗಳು:

  1. ನಾಗಬನಕ್ಕೆ ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ಪ್ರವೇಶಿಸಬೇಕು.
  2. ನಾಗಬನದ ಒಳಗೆ ಹಾಗೂ ಅದರ ಹತ್ತಿರ ಕತ್ತಿ ಪಿಕ್ಕಾಸಿನಿಂದ ಭೂಮಿಯನ್ನು ಆಗೆಯಬಾರದು.
  3. ನಾಗಬನದ ಹತ್ತಿರದ ಮರಮಟ್ಟು ಕಡಿಯಬಾರದು.
  4. ನಾಗದೇವರಿಗೆ ಕರು ಸತ್ತ ದನದ ಹಾಲು ಕೊಡಬಾರದು.
  5. ನಾಗಬನದ ಹತ್ತಿರ ಬೂದಿ ಗೊಬ್ಬರ ಹಾಕಬಾರದು.
  6. ನಾಗದೇವರಿಗೆ ಪಿಂಗಾರ, ಕೇದಗೆ ,ಸಂಪಿಗೆ ತುಂಬಾ ಪ್ರೀತಿ.
  7. ನಾಗದೇವರ ಕಲ್ಲಿಗೆ ಸುರಿದ ಹಾಲು ಸೀಯಾಳ ನೀರು ಇದು ಭೂಮಿಗೆ ಬೀಳಬೇಕು. ಯಾಕೆಂದರೆ ಭೂಮಿಯನ್ನು ಹೊತ್ತನಾಗ ದೇವರು ತಂಪಾಗಬೇಕಾದರೆ ನೀರು ಹಾಲು ಮಣ್ಣಿಗೆ ಬೀಳಬೇಕು.

2009 ಇಸವಿಯವರೆಗೆ ನಮ್ಮ ನಾಗದೇವರ ಕೆಲಸಕ್ಕೆ ಪೆರ್ಮುದೆ ಸೋಮನಾಥ ದೇವಸ್ಥಾನದ ಪೂಜೆಯ ಭಟ್ಟರು( ಅಣ್ಣು ರಾಯರ ಮನೆಯವರು) ಬರುತ್ತಿದ್ದರು. ಅಲ್ಲಿಯ ಭೂಮಿ ಸರಕಾರಕ್ಕೆ ಹೋದ ಮೇಲೆ ಈಗಿನ ಹೊಸ ಜಾಗಕ್ಕೆ ನಮ್ಮ ದೇವಸ್ಥಾನದ ತಂತ್ರಿಗಳಾದ ರಾಧಾಕೃಷ್ಣ ತಂತ್ರಿಗಳು ಬಂದು ಪೂಜೆ ಮಾಡುತ್ತಾರೆ.

ನಾಗಬನದಲ್ಲಿ ನಡೆಯುವ ಸೇವೆಗಳು:

  1. ಅಗಸ್ಟ್ ತಿಂಗಳಲ್ಲಿ ನಾಗರ ಪಂಚಮಿ.
  2. ಏಪ್ರಿಲ್ ತಿಂಗಳಲ್ಲಿ ಆಶ್ಲೇಷ ಪೂಜೆ ಹಾಗೂ ಕುಟುಂಬಿಕರ ತಂಬಿಲ ಸೇವೆ.

ನಾಗತಂಬಿಲ ಕ್ಕೆ ಬೇಕಾದ ವಸ್ತುಗಳು:

  1. ಒಂದು ಕಿಲೋ ಬೆಳ್ತಿಗೆ ಅಕ್ಕಿ, ಎರಡು ತೆಂಗಿನ ಕಾಯಿ, ಎರಡು ಸೀಯಾಳ, ವೀಳ್ಯದೆಲೆ, ಅಡಿಕೆ 1, ಶುದ್ಧ ಹಾಲು, 50 ಗ್ರಾಂ ಅರಸಿನ ಪುಡಿ, 100ml ಜೇನುತುಪ್ಪ, 50 ಗ್ರಾಂ ಸಕ್ಕರೆ, 100ಗ್ರಾಂ ಹರಳು, 250 ಗ್ರಾಂ ಬೆಲ್ಲ, ಕರ್ಪೂರ, ಬತ್ತಿ ಕಟ್ಟು, ದೀಪದ ಎಣ್ಣೆ, 7 ಬಾಳೆಹಣ್ಣು, ಊದುಬತ್ತಿ, 5 ಬಾಳೆಎಲೆ, ಚಿಲ್ಲರೆ ಹಣ.